ಮಳೆ

ಮಳೆ ಎಂದರೆ ಭರ್ರೆಂದು ಎಲ್ಲಾ ಕೊಚ್ಚಿ
ರೊಚ್ಚಿ ಸೀಳಿ ಹಾಯ್ದು ಹರಿದು
ತಲ್ಲಣಗಳ ಬಂಡಾಟಗಳ ಕಳವಳ
ಸೊಂಯ್ಯ ಎಂದು ಸೆಳೆದು ಸಮುದ್ರ
ಅಲೆಗಳ ಅಬ್ಬರಿಕೆ ಹೆಚ್ಚುವ ಬಿಂದುಗಳು.

ಮಳೆ ಎಂದರೆ ಸಣ್ಣಗೆ ಒಡಲು
ಕಂಪಿಸಿ ಬೀಜಗಳ ಮರ್ಮರ ಎದೆಗೆ
ಹಾಯಿಸಿ ಒಳಗೊಳಗೆ ಕುದಿದ ಕಾವಿಗೆ ಸ್ಪರ್ಶ
ಕೊಟ್ಟು ರೆಂಬೆ ಕೊಂಬೆಗಳ ಬೇರುಗಳಿಗೆ
ಹಸಿರು ಉಸಿರು ಹಾಯಿಸಿದ ಜೀವ ಪದಗಳು

ಮಳೆ ಎಂದರೆ ಭೂಗರ್ಭದ ತುಂಬಿದ
ಜೀವ ಜಲಕೆ, ಮೆಲ್ಲಗೆ ಮುಲಕಾಡುವ
ರಸಚೇತನ ಸುರಿಸಿ ಅಲ್ಲೊಂದು ಹುಟ್ಟು
ಸ್ಪುರಿಸಿ ಮೆದು ಹಾಲು ತುಂಬಿದ ಎದೆ
ಕಾಳುಗಳು ಒಡಲು ತುಂಬಿದ ಸಿರಿ ರಾಗಗಳು.

ಮಳೆ ಎಂದರೆ ತೇಲಿ ತೇಲಿ ಮೋಡಗಳು
ಕನಸು ತುಂಬಿದ ಪಡಸಾಲೆ ಜೋಕಾಲಿ ಜೀಕಿ
ಒಲೆಯ ಮುಂದೆ ಅರಳಿದ ರಂಗೋಲಿ ಕುದಿದ
ಗಂಜೀ ಸುವಾಸನೆ, ಅಂಗಳದಲ್ಲಿ ಬಿದ್ದ ಹೊಂಡಗಳ
ಗುರುತು, ಆತ್ಮಕೆ ಅಮರುವ ತಂಪು ಹನಿಗಳು.

ಮಳೆ ಎಂದರೆ ಇಳಿದ ಬಿಂದುಗಳು
ರಾಗಗಳು ಹನಿಗಳು ಪದಗಳು
ಅವಿರ್ಭವಿಸಿ ಅಂತರಂಗದಲಿ ಮರುಹುಟ್ಟು
ಮೋಡಗಳಾಗಿ ಬದುಕು ಬಯಲ ಬಾನ ತುಂಬಾ
ಹರಡಿ ಹಸಿರಾಗಿ, ನೀಲಿಯಾಗಿ, ಖುಷಿಯಾಗಿ, ಮತ್ತೆ
ಹೊಯ್ಯುವ ಅಮೃತ ವಾಹಿನಿಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧೂಮಪಾನ, ಮದ್ಯಪಾನ ಬೇಡ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೨

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys